ಸಾಮಾನ್ಯ ಜ್ಞಾನ - ಕರ್ನಾಟಕ

 

1.       ಗಂಗ ಸಾಮ್ರಾಜ್ಯದ  ಸ್ಥಾಪಕ ಯಾರು ?

        ಕೊಂಗುಣೀವರ್ಮ

2.       ಅಮೋಘವರ್ಷ ಯಾವ ರಾಜವಂಶಕ್ಕೆ ಸೇರಿದವನು ?

    ರಾಷ್ಟ್ರಕೂಟರು

3.       ಚಾಲುಕ್ಯರ  ರಾಜಧಾನಿಯಾಗಿದ್ದ  ಬಾದಾಮಿಯ ಮೊದಲ ಹೆಸರು ಏನು ?

        ವಾತಾಪಿ

4.       ಬನವಾಸಿಯ ಕದಂಬ ವಂಶದ ಸ್ಥಾಪಕ ಯಾರು ?

        ಮಯೂರ ವರ್ಮ ‘

5.       ಶ್ರೀರಂಗ ಯಾರ ಕಾವ್ಯ ನಾಮ ?

        ಆದ್ಯ ರಂಗಾಚಾರ್

6.       ಶರಪಂಜರದಂತಹ ಪ್ರಸಿದ್ದ ಕಾದಂಬರಿಗಳನ್ನು ರಚಿಸಿದ ತ್ರಿವೇಣಿಯವರ ನಿಜ ನಾಮಧೇಯ ಏನು ?

        ಅನಸೂಯಾ ಶಂಕರ್

7.       ಜಿ ಬಿ ಜೋಷಿಯವರ ಕಾವ್ಯನಾಮ ಏನು ?

        ಜಡಭರತ

8.       ಕನ್ನಡದ ಮೊದಲ ಉಪಲಬ್ಧ ಗದ್ಯಕೃತಿ ಯಾವುದು?

        ವಡ್ಡರಾದನೆ.

9.       ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು ಯಾರು?

        ಆರ್.ಎಫ್.ಕಿಟೆಲ್

10.   ದ ರಾ ಬೇಂದ್ರೆಯವರ “ನಾಲ್ಕು ತಂತಿ “ ಗೆ ಯಾವ ವರ್ಷದಲ್ಲಿ ಜ್ಞಾನ ಪೀಠ ಪ್ರಶಸ್ತಿ ದೊರೆಯಿತು ?

1973 ರಲ್ಲಿ

11.   ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?

ಲಿಂಗನಮಕ್ಕಿ ಅಣೆಕಟ್ಟು.

12.   ಕನ್ನಡದ ಮೊದಲ ವ್ಯಾಕರಣ ಗ್ರಂಥ ಶಬ್ದ ಮಣಿ ದರ್ಪಣ ಯಾರ ಕೃತಿ ?

ಕೇಶಿರಾಜ

13.   ಭರಚುಕ್ಕಿ,ಗಗನಚುಕ್ಕಿ ಜಲಪಾತ ಯಾವ ನದಿಯ ಜಲಪಾತಗಳು ?

ಕಾವೇರಿ

14.   ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಆಗುಂಬೆ ಯಾವ ಜಿಲ್ಲೆಯಲ್ಲಿದೆ ?

ಶಿವಮೊಗ್ಗ

15.   ಇತ್ತೀಚಿಗೆ ರಚನೆಯಾದ “ವಿಜಯನಗರ” ಜಿಲ್ಲೆಯ ಕೇಂದ್ರ ಯಾವುದು ?

ಹೊಸಪೇಟೆ

16.   “ಭಾರತದ ಸ್ಕಾಟ್ಲೆಂಡ್” ಎಂದು ಯಾವ ಸ್ಥಳ ಪ್ರಸಿದ್ಧವಾಗಿದೆ ?

ಕೊಡಗು

17.   ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?

ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.

18.    ಯಾವ ವರ್ಷದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ?

1973 ರಲ್ಲಿ

19.   ಭೀಮ ನದಿ ಯಾವ ನದಿಯ ಉಪನದಿ ?

ಕೃಷ್ಣ ನದಿ

20.   ಬಂಡಿಪುರ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ ?

ಚಾಮರಾಜನಗರ


No comments:

Post a Comment