ನಮ್ಮ ಪುರಾಣಗಳು ನಿಮಗೆಷ್ಟು ಗೊತ್ತು?

 1. ಗಣೇಶನಿಗೆ ವರ್ಜ್ಯವಾದ ಯಾವ ಪತ್ರ(ಎಲೆ)ವನ್ನು ಗಣೇಶ ಚತುರ್ಥಿಯಂದು ಮಾತ್ರ ಅರ್ಪಿಸಲಾಗುತ್ತದೆ? 

2. ರಾಮನ ಧನಸ್ಸಿನ ಹೆಸರು ಏನು ?

3. ವಾಲ್ಮೀಕಿಯ  ಮೊದಲ ಹೆಸರು ಏನು ? 

4. ಸತಿಯ ತಂದೆಯಾದ ದಕ್ಷ ಪ್ರಜಾಪತಿಯ ರಾಜಧಾನಿ ಯಾವುದಾಗಿತ್ತು?

5. ತ್ರಿಪುರಾಂತಕಾರಿ ಎಂದು ಯಾರನ್ನು ಕರೆಯಲಾಗುತ್ತದೆ ? 

6. ದಶರಥ ಮತ್ತು ಕೌಸಲ್ಯೆಯ ಮಗಳ ಹೆಸರೇನು?

7. ಕೃಷ್ಣನ ಮಗನಾದ ಸಾಂಬನ ತಾಯಿ ಯಾರು?

8. ಮಹಾಭಾರತದ ಮೂಲ ಹೆಸರು ಏನು ? 

9 ಮಹಾಭಾರತದಲ್ಲಿ ವ್ಯಾಸನಿಂದ ದಿವ್ಯ ದೃಷ್ಟಿಯನ್ನು ಪಡೆದವರು ಯಾರು ?

10. ಪುರಂಧರ ಯಾರ ಹೆಸರು?

11 ರಾಮಾಯಣದಲ್ಲಿ ಮಾಯಾಜಿಂಕೆಯಾಗಿ ವೇಷ ಮರೆಸಿಕೊಂದವರು ಯಾರು ? 

12. ಜನಕನ ರಾಜಧಾನಿ ಯಾವುದು?

13. ಭರತ ಚಕ್ರವರ್ತಿ ಯಾರ ಮಗ ?

14. ವೃಷಕೇತು ಯಾರು ?

15. ಲಕ್ಷ್ಮಣನನ್ನು ಯಾರ ಅವತಾರವೆನ್ನಲಾಗುತ್ತದೆ ?







ಸರಿ ಉತ್ತರಗಳು : 

 1. ತುಳಸಿ

2. ಕೋದಂಡ 

3 ರತ್ನಾಕರ

4. ಕಂಖಲ

5. ಶಿವ 

6. ಶಾಂತಾ 

7. ಜಾಂಬವತಿ 

8. ಜಯ ಸಂಹಿತ 

9. ಸಂಜಯ 

10. ಇಂದ್ರ 

11. ಮಾರೀಚ

12. ಮಿಥಿಲಾ 

13. ದುಷ್ಯಂತ ಮತ್ತು ಶಕುಂತಲೆ

14. ಕರ್ಣನ ಮಗ 

15. ಆದಿಶೇಷ 


ಸ್ವಾತಂತ್ರ್ಯ ದಿನಾಚರಣೆಯ ರಸಪ್ರಶ್ನೆಗಳು

 1. ನಮ್ಮ ರಾಷ್ಟ್ರಗೀತೆಯನ್ನು ಅಧಿಕೃತವಾಗಿ ಅಂಗಿಕರಿಸಿದ ವರ್ಷ ಯಾವುದು ?

a  1947

b 1942

c 1950

2. ಲೋಕಹಿತವಾದಿ ಎಂದು ಯಾರನ್ನು ಕರೆಯಲಾಗುತ್ತದೆ ?

a  ಗೋಪಾಲ್ ಕೃಷ್ಣಾ ಗೋಖಲೆ 

b ಗೋಪಾಲ ಹರಿ ದೇಶಮುಖ 

c  ವಿನಾಯಕ ದಾಮೋದರ್ ಸಾವರ್ಕರ್ 

3.ನಮ್ಮ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?

a  ಭಿಕಾಜಿ ಕಾಮಾ 

b ಅನ್ನಿ ಬೆಸಂಟ್

ಪಿಂಗಳಿ ವೆಂಕಯ್ಯ

4. 1957ರ ಸಿಪಾಹಿ ದಂಗೆಯನ್ನು "ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ" ಎಂದು ಕರೆದವರು ಯಾರು?

a ಬಾಲ ಗಂಗಾಧರ್ ತಿಲಕ 

b ರಬೀಂದ್ರನಾಥ್ ಟಾಗೋರ್ 

c ವಿನಾಯಕ ದಾಮೋದರ್ ಸಾವರ್ಕರ್ 

5ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯು ಯಾವ ವರ್ಷದಲ್ಲಿ ಕೊನೆಗೊಂಡಿತು?

a. 1947

 b 1858

 c 1857

6. ಫಾರ್ವರ್ಡ್ ಬ್ಲಾಕ್ ನ್ನು ಸ್ಥಾಪಿಸಿದವರು ಯಾರು?

a  ಮೋತಿಲಾಲ್ ನೆಹರು 

b ಚಂದ್ರಶೇಖರ್ ಆಜಾದ್ 

c ಸುಭಾಷ್ ಚಂದ್ರ ಬೋಸ್ 

7. ಭಗತ್ ಸಿಂಗ್ ಹುಟ್ಟಿದ ವರ್ಷಯಾವುದು ?

a  1907

b 1908

c  1923

8. 1922 ರ ಯಾವ ಘಟನೆ ಅಸಹಕಾರ ಚಳುವಳಿಯನ್ನು ಹಿಂದಕ್ಕೆ ಪಡೆಯಲು ಕಾರಣವಾಯಿತು ?

a ಜಲಿಯನ್ ವಾಲಾ  ಬಾಗ್ ಹತ್ಯಾಕಾಂಡ 

b ಚೌರಿ ಚೌರ ಘಟನೆ 

c ಕಾಕೋರಿ ರೈಲು ದರೋಡೆ 

9. ಯಾವಾಗ "ವಂದೇ ಮಾತರಂ"ಅನ್ನು  ಮೊದಲ ಬಾರಿಗೆ ಹಾಡಲಾಯಿತು?

a  1896 ರ ಕಾಂಗ್ರೆಸ್ ಅಧಿವೇಶನ 

b 1911 ರ ಕಾಂಗ್ರೆಸ್ ಅಧಿವೇಶನ 

c  1921 ರ ಕಾಂಗ್ರೆಸ್ ಅಧಿವೇಶನ 

10. ಅಸಹಕಾರ ಚಳುವಳಿ ಪ್ರಾರಂಭವಾದ ದಿನದಂದು  ( 1 ಆಗಸ್ಟ 1920) ನಿಧಾನ ಹೊಂದಿದ ಸ್ವತಂತ್ರ ಸೇನಾನಿ ಯಾರು ?

a ಚಿತ್ತರಂಜನ್ ದಾಸ್ 

b ಲೋಕಮಾನ್ಯ ಬಾಲ ಗಂಗಾಧರ ತಿಲಕ

c ಚಂದ್ರ ಶೇಖರ್ ಆಜಾದ್ 








ಸರಿ ಉತ್ತರಗಳು: 

1. c 1950  ( 24 ಜನೇವರಿ 1950)

2. b ಗೋಪಾಲ ಹರಿ ದೇಶಮುಖ್ 

3. c ಪಿಂಗಳಿ ವೆಂಕಯ್ಯ

4. c ವಿನಾಯಕ ದಾಮೋದರ್ ಸಾವರ್ಕರ್ (ಭಾರತೀಯ ಇತಿಹಾಸಗಾರ ಹಾಗು ವಿದ್ವಾಂಸ ವಿ. ಡಿ ಸರ್ವಕರ್ ತಮ್ಮ 1857' ಭಾರತ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದ್ದಾರೆ.)

5. b 1858

6. c ಸುಭಾಷ್ ಚಂದ್ರ ಬೋಸ್ 

7. a  1907  (28 ಸಪ್ಟೆಂಬರ್  1907 ರಂದು  ಬ್ರಿಟಿಷ್ ಭಾರತದ ಪಂಜಾಬ್ ಪ್ರಾಂತ್ಯದ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ)

8. b ಚೌರಿ ಚೌರ ಘಟನೆ 

9. a  1896 ರ ಕಾಂಗ್ರೆಸ್ ಅಧಿವೇಶನ (ವಂದೇ ಮಾತರಂಅನ್ನು  ಮೊದಲ ಬಾರಿಗೆ 1896 ಕಲ್ಕಕತ್ತದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು)

10.  b ಲೋಕಮಾನ್ಯ ಬಾಲ ಗಂಗಾಧರ ತಿಲಕ







ಕರ್ನಾಟಕದ ರಾಜಮನೆತನಗಳು

 

ರಾಜಮನೆತನ : ಕದಂಬರು

ರಾಜಧಾನಿ : ಬನವಾಸಿ

ಸ್ಥಾಪಕರು : ಮಯೂರ ವರ್ಮ

ಅವಧಿ : ಕ್ರಿ.ಶ. 325 - ಕ್ರಿ.ಶ 540

ಪ್ರಮುಖ ಆಡಳಿತಗಾರರು : ಮಯೂರ ವರ್ಮ, ಕಾಕುಸ್ಥವರ್ಮ 

ಸಾಮ್ರಾಜ್ಯದ ವ್ಯಾಪ್ತಿ : ಮಧ್ಯ ಮತ್ತು ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ

 

ರಾಜಮನೆತನ : ಗಂಗರು

ರಾಜಧಾನಿ : ತಲಕಾಡು

ಸ್ಥಾಪಕರು : ಕೊಂಗುಣೀವರ್ಮ

ಅವಧಿ : ಕ್ರಿ.ಶ 325 - ಕ್ರಿ.ಶ.999

ಪ್ರಮುಖ ಆಡಳಿತಗಾರರು : ಅವಿನೀತ  ದುರ್ವಿನೀತ, ರಾಚಮಲ್ಲ

ಸಾಮ್ರಾಜ್ಯದ ವ್ಯಾಪ್ತಿ : ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು

 

ರಾಜಮನೆತನ : ಚಾಲುಕ್ಯರು

ರಾಜಧಾನಿ : ವಾತಾಪಿ (ಬಾದಾಮಿ)

ಸ್ಥಾಪಕರು : ಪುಲಿಕೇಶೀ

ಅವಧಿ : ಕ್ರಿ.ಶ 500 - ಕ್ರಿ.ಶ.757

ಪ್ರಮುಖ ಆಡಳಿತಗಾರರು : ಎರಡನೇ ಪುಲಿಕೇಶೀ, ಎರಡನೇ ವಿಕ್ರಮಾದಿತ್ಯ

ಸಾಮ್ರಾಜ್ಯದ ವ್ಯಾಪ್ತಿ : ಕರ್ನಾಟಕ, ಮಹಾರಾಷ್ಟ್ರದ ಬಹು ಭಾಗ. 

ಮಧ್ಯಪ್ರದೇಶ, ಗುಜರಾತ್ ಮತ್ತು ಒರಿಸ್ಸಾದ ಕೆಲವು ಭಾಗಗಳು

 

ರಾಜಮನೆತನ : ರಾಷ್ಟ್ರಕೂಟರು

ರಾಜಧಾನಿ : ಮಾನ್ಯಖೇಟ (ಮಳಖೇಡ)

ಸ್ಥಾಪಕರು : ದಂತಿದುರ್ಗ

ಅವಧಿ : ಕ್ರಿ.ಶ 757 - ಕ್ರಿ.ಶ.973

ಪ್ರಮುಖ ಆಡಳಿತಗಾರರು : ಧ್ರುವ ಧಾರಾವರ್ಷ, ಮೊದಲನೇ ಕೃಷ್ಣಮುಮ್ಮಡಿ ಗೋವಿಂದ 

ಅಮೋಘವರ್ಷ ನೃಪತುಂಗ, ನಾಲ್ವಡಿ ಇಂದ್ರ, ಮುಮ್ಮಡಿ ಕೃಷ್ಣ,

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು ಮಹಾರಾಷ್ಟ್ರ.ಮತ್ತು ಆಂಧ್ರಪ್ರದೇಶ,

 ತಮಿಳುನಾಡು ಮಧ್ಯಪ್ರದೇಶದ ಭಾಗಗಳು

 

ರಾಜಮನೆತನಚಾಲುಕ್ಯರು

ರಾಜಧಾನಿ : ಕಲ್ಯಾಣಿ

ಸ್ಥಾಪಕರು : ಎರಡನೆಯ ತೈಲಪ

ಅವಧಿ : ಕ್ರಿ.ಶ 973 - ಕ್ರಿ.ಶ.1198

ಪ್ರಮುಖ ಆಡಳಿತಗಾರರು : ಆರನೆಯ ವಿಕ್ರಮಾದಿತ್ಯ

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು ಮಹಾರಾಷ್ಟ್ರ ಮತ್ತು

ಆಂಧ್ರಪ್ರದೇಶ ತಮಿಳುನಾಡು , ಮಧ್ಯಪ್ರದೇಶದ ಭಾಗಗಳು

 

ರಾಜಮನೆತನ : ಸೇವುಣರು

ರಾಜಧಾನಿ : ದೇವಗಿರಿ

ಸ್ಥಾಪಕರು : ದೃಢಪ್ರಹಾರ

ಅವಧಿ : ಕ್ರಿ.ಶ 1198 - ಕ್ರಿ.ಶ.1312

ಪ್ರಮುಖ ಆಡಳಿತಗಾರರು : ಇಮ್ಮಡಿ  ಶ್ರೀರಂಗ

ಸಾಮ್ರಾಜ್ಯದ ವ್ಯಾಪ್ತಿ : ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ

 

ರಾಜಮನೆತನ :ಹೊಯ್ಸಳರು

ರಾಜಧಾನಿ :ದ್ವಾರಸಮುದ್ರ (ಹಳೇಬೀಡು)

ಸ್ಥಾಪಕರು : ಸಳ

ಅವಧಿ :ಕ್ರಿ.ಶ 1000 - ಕ್ರಿ.ಶ.1346

ಪ್ರಮುಖ ಆಡಳಿತಗಾರರು : ವಿಷ್ಣುವರ್ಧನ, ಇಮ್ಮಡಿ ಬಲ್ಲಾಳ

ಸಾಮ್ರಾಜ್ಯದ ವ್ಯಾಪ್ತಿ : ಕರಾವಳಿ ಮತ್ತು ದಕ್ಷಿಣ ಕರ್ನಾಟಕ,

ಆಂಧ್ರಪ್ರದೇಶ, ತಮಿಳುನಾಡು

 

ರಾಜಮನೆತನ: ವಿಜಯನಗರ ಸಾಮ್ರಾಜ್ಯ

ರಾಜಧಾನಿ :ಹಂಪೆ

ಸ್ಥಾಪಕರು : ಹರಿಹರ  ಬುಕ್ಕರು

ಅವಧಿ :ಕ್ರಿ.ಶ 1336 - ಕ್ರಿ.ಶ.1565

ಪ್ರಮುಖ ಆಡಳಿತಗಾರರು : ಇಮ್ಮಡಿ ದೇವರಾಯ, ಕೃಷ್ಣದೇವರಾಯ

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು

ಆಂಧ್ರಪ್ರದೇಶ, ತಮಿಳುನಾಡು

ಕೇರಳ

 

ರಾಜಮನೆತನ: ಬಹಮನಿ ಸಾಮ್ರಾಜ್ಯ

ರಾಜಧಾನಿ :ಕಲಬುರ್ಗಿ

ಬೀದರ್

ಸ್ಥಾಪಕರು : ಅಲ್ಲಾವುದ್ದೀನ್ ಬಹಮನ್ ಶಾಹ್ 

ಅವಧಿ :ಕ್ರಿ.ಶ 1347 - ಕ್ರಿ.ಶ 1527

ಪ್ರಮುಖ ಆಡಳಿತಗಾರರು : ಒಂದನೆಯ ಮೊಹಮ್ಮದ್ ಶಾಹ್ I

ಸಾಮ್ರಾಜ್ಯದ ವ್ಯಾಪ್ತಿ : ದಕ್ಷಿಣ ಭಾರತದ ಪ್ರದೇಶಗಳು

 

ರಾಜಮನೆತನ : ವಿಜಯಪುರದ ಸುಲ್ತಾನರು

ರಾಜಧಾನಿ :ವಿಜಯಪುರ

ಸ್ಥಾಪಕರು : ಯೂಸುಫ್ ಆದಿಲ್ ಖಾನ್

ಅವಧಿ :ಕ್ರಿ.ಶ 1490 - ಕ್ರಿ.ಶ.1686

ಪ್ರಮುಖ ಆಡಳಿತಗಾರರು : ಯೂಸುಫ್ ಆದಿಲ್ ಖಾನ್, ಇಬ್ರಾಹಿಂ ಆದಿಲ್ ಶಾಹ್ II

ಸಾಮ್ರಾಜ್ಯದ ವ್ಯಾಪ್ತಿ : ಬಿಜಾಪುರದ ಸುತ್ತಲಿನ ಪ್ರದೇಶಗಳು

 

ರಾಜಮನೆತನ : ನಾಯಕರು

ರಾಜಧಾನಿ :ಕೆಳದಿ

ಸ್ಥಾಪಕರು : ಚೌಡಗೌಡ ಮತ್ತು ಭದ್ರಪ್ಪ

ಅವಧಿ :ಕ್ರಿ.ಶ 1500 - ಕ್ರಿ.ಶ.1763

ಪ್ರಮುಖ ಆಡಳಿತಗಾರರು : ಶಿವಪ್ಪ ನಾಯಕ, ರಾಣಿ ಚೆನ್ನಮ್ಮ

ಸಾಮ್ರಾಜ್ಯದ ವ್ಯಾಪ್ತಿ : ಕರಾವಳಿ ಮತ್ತು ಮಧ್ಯ  ಕರ್ನಾಟಕ

 

ರಾಜಮನೆತನ: ಒಡೆಯರ್ ರಾಜವಂಶ

ರಾಜಧಾನಿ :ಮೈಸೂರು 

ಸ್ಥಾಪಕರು : ಯದುರಾಯ ಮತ್ತು  ಕೃಷ್ಣರಾಯ

ಅವಧಿ :ಕ್ರಿ.ಶ 1399 - ಕ್ರಿ.ಶ 1831

ಪ್ರಮುಖ ಆಡಳಿತಗಾರರು : ರಾಜ ಒಡೆಯರ್, ರಣಧೀರ ಕಂಠೀರವ,

ಸಾಮ್ರಾಜ್ಯದ ವ್ಯಾಪ್ತಿ : ಚಿಕ್ಕದೇವರಾಜ ಒಡೆಯರ್, ಮುಮ್ಮಡಿ ಕೃಷ್ಣದೇವರಾಜ ಒಡೆಯರ್

ಹಳೆಯ ಮೈಸೂರಿನ ಪ್ರದೇಶಗಳು