ನಮ್ಮ ಪುರಾಣಗಳು ನಿಮಗೆಷ್ಟು ಗೊತ್ತು?

 1. ಗಣೇಶನಿಗೆ ವರ್ಜ್ಯವಾದ ಯಾವ ಪತ್ರ(ಎಲೆ)ವನ್ನು ಗಣೇಶ ಚತುರ್ಥಿಯಂದು ಮಾತ್ರ ಅರ್ಪಿಸಲಾಗುತ್ತದೆ? 

2. ರಾಮನ ಧನಸ್ಸಿನ ಹೆಸರು ಏನು ?

3. ವಾಲ್ಮೀಕಿಯ  ಮೊದಲ ಹೆಸರು ಏನು ? 

4. ಸತಿಯ ತಂದೆಯಾದ ದಕ್ಷ ಪ್ರಜಾಪತಿಯ ರಾಜಧಾನಿ ಯಾವುದಾಗಿತ್ತು?

5. ತ್ರಿಪುರಾಂತಕಾರಿ ಎಂದು ಯಾರನ್ನು ಕರೆಯಲಾಗುತ್ತದೆ ? 

6. ದಶರಥ ಮತ್ತು ಕೌಸಲ್ಯೆಯ ಮಗಳ ಹೆಸರೇನು?

7. ಕೃಷ್ಣನ ಮಗನಾದ ಸಾಂಬನ ತಾಯಿ ಯಾರು?

8. ಮಹಾಭಾರತದ ಮೂಲ ಹೆಸರು ಏನು ? 

9 ಮಹಾಭಾರತದಲ್ಲಿ ವ್ಯಾಸನಿಂದ ದಿವ್ಯ ದೃಷ್ಟಿಯನ್ನು ಪಡೆದವರು ಯಾರು ?

10. ಪುರಂಧರ ಯಾರ ಹೆಸರು?

11 ರಾಮಾಯಣದಲ್ಲಿ ಮಾಯಾಜಿಂಕೆಯಾಗಿ ವೇಷ ಮರೆಸಿಕೊಂದವರು ಯಾರು ? 

12. ಜನಕನ ರಾಜಧಾನಿ ಯಾವುದು?

13. ಭರತ ಚಕ್ರವರ್ತಿ ಯಾರ ಮಗ ?

14. ವೃಷಕೇತು ಯಾರು ?

15. ಲಕ್ಷ್ಮಣನನ್ನು ಯಾರ ಅವತಾರವೆನ್ನಲಾಗುತ್ತದೆ ?







ಸರಿ ಉತ್ತರಗಳು : 

 1. ತುಳಸಿ

2. ಕೋದಂಡ 

3 ರತ್ನಾಕರ

4. ಕಂಖಲ

5. ಶಿವ 

6. ಶಾಂತಾ 

7. ಜಾಂಬವತಿ 

8. ಜಯ ಸಂಹಿತ 

9. ಸಂಜಯ 

10. ಇಂದ್ರ 

11. ಮಾರೀಚ

12. ಮಿಥಿಲಾ 

13. ದುಷ್ಯಂತ ಮತ್ತು ಶಕುಂತಲೆ

14. ಕರ್ಣನ ಮಗ 

15. ಆದಿಶೇಷ 


No comments:

Post a Comment