Showing posts with label SSLC ಕನ್ನಡ ವ್ಯಾಕರಣ. Show all posts
Showing posts with label SSLC ಕನ್ನಡ ವ್ಯಾಕರಣ. Show all posts

SSLC ಕನ್ನಡ ವ್ಯಾಕರಣ - 2

 1. ‘ಮಕ್ಕಳು ಚಿಟಚಿಟನೆ ಚೀರಿದರು’ ಈ ವಾಕ್ಯದಲ್ಲಿ ಗೆರೆ ಎಳೆದ ಪದ – 

a. ಅನುಕರಣಾವ್ಯಯ 

2. ‘ನೋಡಿ ನೋಡಿ’ ಈ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ –

a. ದ್ವಿರುಕ್ತಿ 

3. ಗುಂಪಿಗೆ ಸೇರದ ಪದ ಯಾವುದು ಆಟಪಾಠ, ನಡೆನಡೆ, ಹೌದು ಹೌದು, ಸಾಕುಸಾಕು –

a. ಆಟಪಾಠ (ಏಕೆಂದರೆ ಆಟಪಾಠ ಜೋಡು ನುಡಿ ಉಳಿದವುಗಳೆಲ್ಲಾ ದ್ವಿರುಕ್ತಿಗಳು) 

4. ‘ಬೇಗ ಬೇಗ’ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ – 

a. ದ್ವಿರುಕ್ತಿ 

5. ‘ಕಪ್ಪಕಾಣಿಕೆ’ ಪದದಲ್ಲಿರುವ ವ್ಯಾಕರಣಾಂಶ – 

a. ಜೋಡುನುಡಿ 

6. ‘ಪಟಪಟ, ಧರಣಿಮಂಡಲ, ನಡೆನಡೆ, ರೀತಿನೀತಿ’ ಪದಗಳಲ್ಲಿ ಅನುಕರಣಾವ್ಯಯ ಪದ ಯಾವುದು – 

a. ಪಟಪಟ 

7. ‘ಬಿಟ್ಟು ಬಿಡದೆ ಪಟಪಟನೆ ಸುರಿಯುವ ಮಳೆಯಲ್ಲಿ ಮಕ್ಕಳು ಹಿಂದೆ ಹಿಂದೆ ನೋಡದೆ ಆಡಿದರು’ ಈ ವ್ಯಾಕರಣ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ 

a. ಪಟಪಟನೆ 

8. ‘ಕಾಡಿನ ದಾರಿಯಲ್ಲಿ ಹಾವು ಸರಸರನೆ ಹೋಯಿತು’ ಗೆರೆ ಎಳೆದ ಪದ 

a. ಅನುಕರಣಾವ್ಯಯ 

9. ‘ಪ್ರವಾಹದಲ್ಲಿ ಜನ ಮನೆ ಮಠಗಳನ್ನು ಕಳೆದುಕೊಂಡು ಊರೂರು ತಿರುಗಾಡಿದರು’ ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ -  

a. ಊರೂರು 

10. ‘ಕಾಡಿಗೆ ಮತ್ತೆ ಮತ್ತೆ ಬೆಂಕಿ ಬಿದ್ದು ಧಗಧಗನೆ ಉರಿದು ಮರಗಳೆಲ್ಲ ನಾಶವಾದವು’ ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ –

a. ಧಗಧಗ 

11. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವಾಗ ಬಳಸುವ ಚಿಹ್ನೆ –

a. ವಿವರಣಾತ್ಮಕ ಚಿಹ್ನೆ 

12. ಪ್ರಶ್ನೆಗಳನ್ನು ಬರೆಯುವ ಸಂದರ್ಭದಲ್ಲಿ ಪದ ಅಥವಾ ವಾಕ್ಯದ ಅಂತ್ಯದಲ್ಲಿ ಬಳಸುವ ಚಿಹ್ನೆ –

a. ಪ್ರಶ್ನಾರ್ಥಕ ಚಿಹ್ನೆ 

13. ವಾಕ್ಯದ ಪೂರ್ಣಾರ್ಥ ಕ್ರಿಯೆಯನ್ನು ಸೂಚಿಸುವ ಚಿಹ್ನೆ – 

a. ಪೂರ್ಣವಿರಾಮ 

14. ‘ಒಂದು ದಿನ ನರಿಯು ಕೊಕ್ಕರೆ (ನೀರು ಹಕ್ಕಿ) ಯನ್ನು ಊಟಕ್ಕೆ ಕರೆಯಿತು’ ಈ ವಾಕ್ಯದಲ್ಲಿರುವ ವಿವರಣಾತ್ಮಕ ಚಿಹ್ನೆ 

a. ಆವರಣ ಚಿಹ್ನೆ 

15. ಬರವಣಿಗೆಯಲ್ಲಿ ಹರ್ಷ, ಅಚ್ಚರಿ, ದುಃಖ, ಕೋಪ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಲೇಖನ ಚಿಹ್ನೆಗಳನ್ನು ಹೀಗೆಂದು ಕರೆಯುತ್ತಾರೆ – 

a. ಭಾವಸೂಚಕ ಚಿಹ್ನೆ 

16. ‘ನಿನ್ನ ಹೆಸರೇನು?’ ಇಲ್ಲಿ ಬಳಸಿರುವ ಲೇಖನ ಚಿಹ್ನೆ – 

a. ಪ್ರಶ್ನಾರ್ಥಕ ಚಿಹ್ನೆ 

17. ‘ದ. ರಾ. ಬೇಂದ್ರೆ ಅವರ ಭಾವಗೀತೆಗಳನ್ನು ಕೇಳಿ ವಿದ್ಯಾರ್ಥಿಗಳು ಮೈಮರೆಯುವರು’ ಈ ವಾಕ್ಯವು –

a. ಮಿಶ್ರವಾಕ್ಯ

18. ಒಂದೇ ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ಮತ್ತು ಖಚಿತ ಅರ್ಥ ಕೊಡುವ ವಾಕ್ಯಗಳೇ ಈ ವಾಕ್ಯ –

a. ಸಾಮಾನ್ಯ ವಾಕ್ಯ 

19. ‘ಮಕ್ಕಳು ಹಾಲನ್ನು ಕುಡಿಯುತ್ತಾರೆ ಮತ್ತು ಹಣ್ಣನ್ನು ತಿನ್ನುತ್ತಾರೆ’ ಈ ವಾಕ್ಯವು – 

a. ಸಂಯೋಜಿತವಾಕ್ಯ 

20. ಉಪಮೇಯಕ್ಕಿರುವ ಹೆಸರು – 

a. ವರ್ಣ್ಯ 

21. ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಉಪಮೆಯನ್ನು ವರ್ಣಿಸಲಾಗಿದೆಯೋ ಅದನ್ನು _________ ಎನ್ನುತ್ತಾರೆ – 

a. ಉಪಮಾನ (ವರ್ಣಕ)

22. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿರುವ ಸಮಾನಧರ್ಮ – 

a. ಅರಳಿತ್ತು 

23. ‘ಹೂವಿನ ಹಾಗೆ ಸುಂದರ’ ಈ ಉಪಮಾಲಂಕಾರದಲ್ಲಿ ಉಪಮಾನ –

a. ಹೂ 

24. ಉಪಮಾನವೇ ಉಪಮೇಯವೆಂದು ರೂಪಿಸಿ ಅಭೇದತೆಯನ್ನು ಹೇಳುವ ಅಲಂಕಾರ – 

a. ರೂಪಕ 

25. ಪದ್ಯ ರಚನೆಯ ನಿಯಮಗಳನ್ನು ವಿವರಿಸುವ ಶಾಸ್ತ್ರ –

a. ಛಂದಸ್ಸು 

26. ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಆದಿ ಮದ್ಯ ಅಂತ್ಯದಲ್ಲಿ ನಿಯತವಾಗಿ ಬಂದರೆ ________ ಎನ್ನುತ್ತಾರೆ – 

a. ಪ್ರಾಸ 

27. ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ – 

a. ಯತಿ

28. ಗಣದಲ್ಲಿ ಎಷ್ಟು ವಿಧ – 

a.

29. ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವವರು – 

a. ಗುರು 

30. ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲವನ್ನು ಹೀಗೆ ಕರೆಯುವರು – 

a. ಮಾತ್ರೆ 

31. ಮೂರು ಸಾಲಿನ ಪದ್ಯಕ್ಕೆ ಹೀಗೆನ್ನುವವರು –

a. ತ್ರಿಪದಿ 

32. ಇದು ಅಚ್ಚ ಕನ್ನಡದ ದೇಶಿ ಛಂದಸ್ಸು – 

a. ತ್ರಿಪದಿ  

33. ಮುಕುತಿ, ಬಕುತಾ, ಜನುಮ, ವ್ಯವಸಾಯ ಈ ಪದಗಳಲ್ಲಿ ತತ್ಸಮ ರೂಪಕ್ಕೆ ಉದಾಹರಣೆಯಾಗಿರುವ ಪದ – 

a. ವ್ಯವಸಾಯ 

34. ‘ವಿದ್ಯೆ’ ಈ ಪದದ ತದ್ಭವ ರೂಪ – 

a. ಬಿಜ್ಜೆ 

35. ‘ಜೀವವೊಂದು’ ಈ ಪದದಲ್ಲಿರುವ ಸಂಧಿ –

a. ಆಗಮ ಸಂಧಿ 

36. ತತ್ತ್ವಪದ, ಕಾವ್ಯವಾಚನ, ಹೆಗ್ಗುರಿ, ಮೈಮರೆತು ಈ ಪದಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾಗಿರುವ ಪದ – 

a. ಹೆಗ್ಗುರಿ 

37. ಪ್ರಧಾನ ವಾಕ್ಯದಲ್ಲಿಯ ಅನೇಕ ಉಪವಾಕ್ಯಗಳು ಅಂತ್ಯದಲ್ಲಿ ಬಳಸುವ ಲೇಖನ ಚಿಹ್ನೆ – 

a. ಅರ್ಧವಿರಾಮ 

38. ‘ಅಬ್ಬಾ! ಈ ವನ ಎಷ್ಟು ಸುಂದರವಾಗಿದೆ’ ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ – 

a. ಭಾವಸೂಚಕ 

39. ‘ಬ್ರಹ್ಮ’ ಈ ಪದದ ತದ್ಭವ ರೂಪ – 

a. ಬೊಮ್ಮ 

40. ಎರಡೂ ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ______ ಎಂದು ಕರೆಯುತ್ತಾರೆ – 

a. ದೀರ್ಘಸ್ವರ 

41. ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ –

a. 34 

42. ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ತಿಳಿಸಲು ಬಳಚು ಬಳಸುವ ಚಿಹ್ನೆ – 

a. ಉದ್ಧರಣ 

43. ‘ಅವನು’ ಈ ಪದವು ಈ ಸರ್ವನಾಮಕ್ಕೆ ಉದಾಹರಣೆಯಾಗಿದೆ – 

a. ಪ್ರಥಮ ಪುರುಷ 

44. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿ ಬಂದಿರುವ ಉಪಮೇಯ – 

a. ಕಮಲ 

45. ತಂದೆ ತಾಯಿ ಹಿರಿಯರಿಗೆ ಪತ್ರ ಬರೆಯುವಾಗ ಬಳಸುವ ಮುಕ್ತಾಯದ ಗೌರವ ಸಂಬೋಧನೆ – 

a. ನಮಸ್ಕಾರಗಳು 

46. ‘ಸತ್ಪುರುಷರ ಸಹವಾಸದಲ್ಲಿ ಶರೀಫರು ಬಾಳಿಬದುಕಿದರು’ ಇಲ್ಲಿ ಸಪ್ತಮೀ ವಿಭಕ್ತಿಪ್ರತ್ಯಯದಿಂದ ಕೂಡಿರುವ ಪದ – 

a. ಸಹವಾಸದಲ್ಲಿ 

47. ‘ಕಲಶ’ ಈ ಪದದ ತದ್ಭವ ರೂಪ – 

a. ಕಳಸ 

48. ‘ಅರಮನೆ’ ಪದವು ಈ ಸಮಾಸಕ್ಕೆ ಉದಾಹರಣೆ – 

a. ತತ್ಪುರುಷ 

49. ರೋಗರುಜಿನ, ಕಣಕಣ, ಧಮನಿ ಧಮನಿ, ಕಿಡಿಕಿಡಿ ಈ ಪದಗಳಲ್ಲಿ ಜೋಡುನುಡಿಗೆ ಉದಾಹರಣೆಯಾಗಿರುವ ಪದ – 

a. ರೋಗರುಜಿನ 

50. ‘ಹಿಮಾಲಯ’ ಇದು ಈ ನಾಮಪದಕ್ಕೆ ಉದಾಹರಣೆಯಾಗಿದೆ –

a. ಅಂಕಿತನಾಮ 

51. ‘ಕೈಮುಗಿ’ ಈ ಪದದಲ್ಲಿರುವ ಸಮಾಸ – 

a. ಕ್ರಿಯಾಸಮಾಸ 

52. ನೀನು, ತಾನು, ನಾನು, ಇವನು ಈ ಪದಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ – 

a. ತಾನು 

53. ‘ಭಾಗವತರು ಬಯಲಾಟಗಳಲ್ಲಿ ಪಾತ್ರ ವಹಿಸಿ ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತಿದ್ದರು’ ಇಲ್ಲಿ ದ್ವಿತೀಯ ವಿಭಕ್ತಿಯಿಂದ ಕೂಡಿರುವ ಪದ – 

a. ಕಣ್ಮನಗಳನ್ನು 

54. ‘ಚೆನ್ನಮ್ಮನು ಮಹಿಳೆ ಮತ್ತು ಮಕ್ಕಳನ್ನು ಅಕ್ಕರೆಯಿಂದ ಕಂಡ ಕರುಣಾಮಯಿ’ ಇದು _____ ವಾಕ್ಯಕ್ಕೆ ಉದಾಹರಣೆ– 

a. ಸಂಯೋಜಿತ ವಾಕ್ಯ 

55. ರಕ್ತಗಾಲಿನ, ಗೋಳಿಲ್ಲದ, ಕುಲವೆನ್ನದ, ಗುಂಡಿಲ್ಲದ ಈ ಪದಗಳಲ್ಲಿ _______ ಆದೇಶಸಂಧಿಗೆ ಉದಾಹರಣೆ – 

a. ರಕ್ತಗಾಲಿನ 

56. ‘ಕಾವ್ಯ’ ಪದದ ತದ್ಭವ ರೂಪ –

a. ಕಬ್ಬ 

57. ಆಕ್ಸಿಜನ್ ಇದು ಈ ಭಾಷೆಯಿಂದ ಬಂದ ಪದವಾಗಿದೆ –

a. ಇಂಗ್ಲೀಷ್ 

58. ________ ಇದು ಪ್ರಧಾನ ವಾಕ್ಯಗಳಲ್ಲಿನ ಉಪವಾಕ್ಯಗಳ ಅಂತ್ಯದಲ್ಲಿ ಬಳಕೆಯಾಗುತ್ತದೆ – 

a. ಅರ್ಧವಿರಾಮ ಚಿಹ್ನೆ (;)

59. ವಿಷಯಕ್ಕೆ ವಿವರಣೆ ನೀಡಲು _______ ವಿರಾಮ ಬಳಕೆಯಾಗುತ್ತದೆ – 

a. ವಿವರಣ ವಿರಾಮ (:) 

60. ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ ಸೂಚಿಸಲು ಆ ಭಾಗವನ್ನು _______ ಚಿಹ್ನೆಯೊಳಗೆ ಬರೆಯಬೇಕು –

a. ವಾಕ್ಯವೇಷ್ಟನ (ಒಂಟಿ ಉದ್ಧರಣ)

ಕ್ರಿಯಾಪದಗಳು

ನಾವು ಆಡುವಂತಹ ದಿನನಿತ್ಯದ ಮಾತುಗಳನ್ನು ಗಮನಿಸಿ. ಒಂದು ವಾಕ್ಯದಲ್ಲಿ ಕರ್ತೃಪದ, ಕರ್ಮಪದ ಹಾಗೂ ಕ್ರಿಯಾಪದಗಳಿರುತ್ತವೆ. ನಾವು ಮಾತನಾಡುವಾಗ ಪದಗಳ ಗುಂಪುಗಳನ್ನು ಒಂದು ನಿರ್ದಿಷ್ಟ ಸರಣಿಯಲ್ಲಿ ಬಳಸುತ್ತೇವೆ. ಆಗ ಮಾತ್ರ ನಾವು ಆಡುವ ಮಾತುಗಳಿಗೆ ಅರ್ಥ ಬರುತ್ತದೆ. ನಿರ್ದಿಷ್ಟ ಅರ್ಥ ಕೊಡುವಂತಹ ಒಂದು ಸರಣಿಯಲ್ಲಿ ಜೋಡಿಸಿದ ಪದಗಳ ಗುಂಪನ್ನು 'ವಾಕ್ಯ' ಎನ್ನುತ್ತೇವೆ. ವಾಕ್ಯದಲ್ಲಿ ಯಾವ ಯಾವ ರೀತಿಯ ಪದಗಳಿರುತ್ತವೆ ಎಂಬುದನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯೋಣ:

ವೀಣಾ ಆಟ ಆಡಿದಳು

ರವಿ ಹಣ್ಣನ್ನು ತಿಂದನು

ಮೇಲಿನ ವಾಕ್ಯಗಳಲ್ಲಿ 'ಆಡಿದಳು', 'ತಿಂದನು' ಎಂಬ ಪದಗಳು 'ವೀಣಾ' ಮತ್ತು 'ರವಿ' ಮಾಡಿದ ಕೆಲಸವನ್ನು ಅಥವಾ ಕ್ರಿಯೆಯನ್ನು ಸೂಚಿಸುತ್ತವೆ. ಹೀಗೆ ಕ್ರಿಯೆಯನ್ನು ಸೂಚಿಸುವ ಪದಗಳನ್ನು 'ಕ್ರಿಯಾಪದಗಳು' ಎನ್ನುತ್ತೇವೆ. ಕ್ರಿಯೆಯನ್ನು ಮಾಡಿದವರನ್ನು ಕರ್ತೃ ಎನ್ನಲಾಗುತ್ತದೆ. ಹಾಗಾಗಿ ಕೆಲಸವನ್ನು ಅಥವಾ ಕ್ರಿಯೆಯನ್ನು ಮಾಡಿದವರನ್ನು ಸೂಚಿಸುವ ಪದಗಳನ್ನು 'ಕರ್ತೃಪದ' ಎನ್ನುತ್ತೇವೆ. ಅವರು ಮಾಡಿದ ಕೆಲಸವನ್ನು ಕುರಿತು ವಿವರ ನೀಡುವ ಪದಗಳಿರುತ್ತವೆ. 'ಏನು ಆಡಿದಳು?', 'ಏನು ತಿಂದನು?' ಹೀಗೆ 'ಏನನ್ನು' ಎಂಬ ಪ್ರಶ್ನೆಗೆ ಉತ್ತರ ಕೊಡುವ ಪದಗಳನ್ನು 'ಕರ್ಮಪದ'ಗಳೆಂದು ಕರೆಯುತ್ತೇವೆ.

 

ಕ್ರ.ಸಂ.

ವಾಕ್ಯಗಳು

ಕರ್ತೃ ಪದ

ಕರ್ಮಪದ

ಕ್ರಿಯಾಪದ

ಕಾಲಸೂಚಕ

ಗೀತಾ ಊಟ ಮಾಡುವಳು

ಗೀತಾ

ಊಟ

ಮಾಡುವಳು

ಭವಿಷ್ಯತ್ ಕಾಲ

ಶರೀಫ ಚೆಂಡು ಹಿಡಿದನು

ಶರೀಫ

ಚೆಂಡು

ಹಿಡಿದನು

ಭೂತ ಕಾಲ

ರೋಸಿ ಉಡುಪನ್ನು ಹೊಲೆಯುತ್ತಿದ್ದಾಳೆ

ರೋಸಿ

ಉಡುಪನ್ನು

ಹೊಲೆಯುತ್ತಿದ್ದಾಳೆ

ವರ್ತಮಾನ ಕಾಲ

ಕಮಲ ಪಾಠ ಓದಿದಳು

ಕಮಲ

ಪಾಠ

ಓದಿದಳು

ಭೂತ ಕಾಲ

ರಜನಿ ಸಿನಿಮಾ ನೋಡಿದಳು

ರಜನಿ

ಸಿನಿಮಾ

ನೋಡಿದಳು

ಭೂತ ಕಾಲ

ಬೆಕ್ಕು ಹಾಲನ್ನು ಕುಡಿಯಿತು

ಬೆಕ್ಕು

ಹಾಲನ್ನು

ಕುಡಿಯಿತು

ಭೂತ ಕಾಲ

ನಾಯಿ ಮೂಳೆಯನ್ನು ಕಡಿಯಿತು

ನಾಯಿ

ಮೂಳೆಯನ್ನು

ಕಡಿಯಿತು

ಭೂತ ಕಾಲ

ಗೆಳೆಯರು ಆಟವನ್ನು ಆಡುತ್ತಿದ್ದಾರೆ

ಗೆಳೆಯರು

ಆಟವನ್ನು

ಆಡುತ್ತಿದ್ದಾರೆ

ವರ್ತಮಾನ ಕಾಲ

ರೈತರು ಬೆಳೆಯನ್ನು ಬೆಳೆಯುತ್ತಾರೆ

ರೈತರು

ಬೆಳೆಯನ್ನು

ಬೆಳೆಯುತ್ತಾರೆ

ಭವಿಷ್ಯತ್ ಕಾಲ

೧೦

ಮಕ್ಕಳು ಮೈದಾನವನ್ನು ಸ್ವಚ್ಛಗೊಳಿಸಿದರು

ಮಕ್ಕಳು

ಮೈದಾನವನ್ನು

ಸ್ವಚ್ಛಗೊಳಿಸಿದರು

ಭೂತ ಕಾಲ

   ಕಾಲಸೂಚಕ ಕ್ರಿಯಾಪದ

ಕ್ರಿಯೆಯ ಅರ್ಥವನ್ನು ಕೊಡುವ ಪದಗಳೆಲ್ಲವೂ ಕ್ರಿಯಾ ಪದಗಳು. ಕ್ರಿಯಾಪದದ ಮೂಲರೂಪವೇ ಕ್ರಿಯಾಪ್ರಕೃತಿ. ಕ್ರಿಯಾಪ್ರಕೃತಿಯನ್ನು ಧಾತು ಎನ್ನುವರು. ಧಾತುವಿಗೆ ಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ. ಎರಡರ ನಡುವೆ ಕ್ರಮವಾಗಿ '', 'ಉತ್ತ', '' ಎಂಬ ಕಾಲಸೂಚಕ ಪ್ರತ್ಯಯಗಳು ಸೇರಿ ಕೆಲಸ ನಡೆಯುವ ಕಾಲವನ್ನು ತಿಳಿಸುತ್ತವೆ. ಇದರಲ್ಲಿ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ ಕಾಲ ಎಂಬ ಮೂರು ಬಗೆಗಳಿವೆ.

 

ಭೂತಕಾಲ: ಧಾತುಗಳಿಗೆ ಭೂತಕಾಲದಲ್ಲಿ ಖ್ಯಾತ ಪ್ರತ್ಯಯಗಳು ಸೇರಿ ಭೂತಕಾಲದ ಕ್ರಿಯಾಪದಗಳು ಎನಿಸುವುವು. ಭೂತಕಾಲದಲ್ಲಿ '' ಎಂಬ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.

ಉದಾ: ಓದಿದನು, ತಿಂದಳು, ಬಂದಿತು, ಹಾಡಿದರು, ಬಂದೆನು ಇತ್ಯಾದಿ.

 

ವರ್ತಮಾನಕಾಲ: ಧಾತುಗಳಿಗೆ ವರ್ತಮಾನ ಕಾಲದಲ್ಲಿ ಖ್ಯಾತ ಪ್ರತ್ಯಯಗಳು ಸೇರಿ ವರ್ತಮಾನಕಾಲದ ಕ್ರಿಯಾಪದಗಳು ಎನಿಸುವುವು. ವರ್ತಮಾನ ಕಾಲದಲ್ಲಿ 'ಉತ್ತ' ಎಂಬ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.

ಉದಾ: ತಿನ್ನುತ್ತಾನೆ, ಓದುತ್ತಾಳೆ, ಬರುತ್ತದೆ, ಹಾಡುತ್ತಾರೆ, ಬರೆಯುತ್ತಾರೆ ಇತ್ಯಾದಿ.

 

ಭವಿಷ್ಯತ್ ಕಾಲ: ಧಾತುಗಳಿಗೆ ಭವಿಷ್ಯತ್ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ಭವಿಷ್ಯತ್ ಕಾಲದ ಕ್ರಿಯಾಪದಗಳು ಎನಿಸುವುವು. ಭವಿಷ್ಯತ್ ಕಾಲದಲ್ಲಿ '' ಎಂಬ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.

ಉದಾ: ಬರುವನು, ಬರುವರು, ಹಾಡುವರು, ಬರೆಯುವರು, ತಿನ್ನುವರು ಇತ್ಯಾದಿ.